ದ್ವಾರಕೆ ಮುಳುಗಿದಾಗ

ಮತ್ತೆ ಅಳಿದುಳಿದ ಮಂದಿ ಹೊರಟಾಗ
ಕತ್ತಲೆಗೆ
ದೂಳು ಹೊಗೆ ಮತ್ತು ಶಬ್ದ ನಿಂತಾಗ
ಕತ್ತಲೆಗೆ
ಬದುಕಿ ಉಳಿದ ಭೂಮಿಯತ್ತ ನೋಡಿದಾಗ
ಕತ್ತಲೆಗೆ

ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ
ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ
ಕೇಳಿಸಿತು-ಮನುಷ್ಯ ಧ್ವನಿಯಲ್ಲ
ನೊರೆಯಾಡುವ ನೆರೆ ನೀರು ನೀರೇ
ಕಾಣಿಸಿತು-ಮಣ್ಣಲ್ಲ

ಹೀಗೆ ಅಂದಿರುಳು ಪ್ರಯಾಣದಲ್ಲಿ ಕಳೆದು ಮಸುಕಾದಾಗ
ಹೊಸ ಭೂಮಿಗೆ ಬಂದೆವು ಹೊಸ ಪರಿಸರದಲ್ಲಿ ಯಾವುದೂ
ಅರ್ಥವಾಗದೆ ನಮಗೆ ನಾವೇ ಗುರುತಿಲ್ಲದೆ ಅಲೆದೆವು
ಒಂದು ದುರಂತ ಮೌನದ ಭಾರದ ಕೆಳಗೆ ಕುಸಿದೆವು

ಭವಿಷ್ಯದಲ್ಲಿ ವಂಚಿತರಾಗಿ ಕಳೆದ ಕಲ್ಪದ ಅರೆಮರೆವಿನಲ್ಲಿ
ಚಳಿಗೆ ಗಾಳಿಗೆ ಸ್ವಲ್ಪ ಸ್ವಲ್ಪವೇ ಸವೆದೆವು
ಅನಾಥ ಶಿಲ್ಪಗಳಾಗಿ ಉಳಿದೆವು
ಅವಶೇಷಗಳಂತೆ ಕಾದೆವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಭಿಸಾರಿಕೆ
Next post ಭವ್ಯ ಅಕ್ಕರೇ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys